Wednesday, February 16, 2022

ಗೌರವವನ್ನು ಸಂಭಾವನೆಯಿಂದ ಅಳೆಯಲಾದೀತೇ?

 


ಅತ್ಯುನ್ನತ ಗೌರವವನ್ನು ಪ್ರತಿಬಿಂಬಿಸುತ್ತಿರುವ ಈ ಮಹಾಕೃತಿಯ ಮಾರ್ಗದರ್ಶಕರು ಶ್ರೀ ಎಂ ಎಂ ದೇವ್. ಅವರ ಅಪೂರ್ವ ಶಿಶು ದೇವ್ ನೆಸ್ಟ್ ಇಂಕ್ ಯೋಜನೆಗೆ ಅನುಗುಣವಾಗಿ ಈ ಕಾರ್ಯವನ್ನು ಶ್ರೀ ಭಾನು ಪ್ರಕಾಶ್ ಆಚಾರ್ಯ ಪೂರ್ಣಗೊಳಿಸಿದ್ದಾರೆ.  ಬೆಲೆಕಟ್ಟಲಾಗದ ಈ ದೀರ್ಘ ಅವಧಿಯ ಕೆತ್ತನೆಯನ್ನು ಯಾರಿಗೆ ಸಮರ್ಪಿಸಬಹುದು, ಅಥವಾ ಯಾವ ಶೇಖರಣಾ ಕಲಾಕೃತಿಗಳ ಖಜಾನೆಯನ್ನು ಇದು ಅಲಂಕರಿಸುತ್ತದೆ? ಕಾದು ನೋಡೋಣ.

ದೇವ್ ನೆಸ್ಟ್ ಬರಹ

ವೃತ್ತಿಪರರಲ್ಲಿ ಕೆಲವರು ಸಂಪಾದಿಸುವುದು ಗೌರವವನ್ನಷ್ಟೇ. ಸಂಪರ್ಕಗಳಷ್ಟೇ ಅವರ ಉಳಿತಾಯ. ಸಂಸಾರ ತೂಗಿಸಿಕೊಂಡು ಹೋಗಲು ಹರಸಾಹಸ ಮಾಡುವ ಅವರು ಸದಾ ಖುಷಿಯಾಗಿರುವುದಂತೂ ಖಂಡಿತ. ಈ ವಿಚಾರಕ್ಕೆ ನಾನೇ ಒಂದು ಉದಾಹರಣೆ.

ಹೋಲಿಸಿ ನೋಡದೆ ಉದಾಹರಣೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಬಹುರಾಷ್ಟ್ರೀಯ ಕಂಪನಿಯೊಂದರ ನಿರ್ವಾಹಕ (manager) ಓರ್ವನ/ಳ ಸ್ಥಾನಮಾನಗಳನ್ನು ಗಮನಿಸೋಣ. ಅವನಿ/ಳಿಗೆ ಕನಿಷ್ಠ ತಿಂಗಳಿಗೆ ಮೂರು ಲಕ್ಷ ರೂ ಸಂಬಳ ದೊರೆಯುವುದು ನಿಶ್ಚಿತ. ಅವನ/ಳ ಕೇವಲ ಹತ್ತನೇ ಒಂದು ಭಾಗದಷ್ಟು ವರಮಾನವನ್ನೂ ನಾನು ಕಲ್ಪಿಸಿಕೊಳ್ಳಲಾರೆ. ಆದರೆ ಕೆಲಸದ ಒತ್ತಡ ನನ್ನಷ್ಟು ಸಂತೋಷದಿಂದಿರಲು ಅವನ/ಳನ್ನು ಬಿಡುವುದೇ? ಉಹೂಂ. ನನ್ನ ಅನಂದಾತಿರೇಕದ ಹತ್ತನೇ ಒಂದು ಭಾಗವೂ ಅವರಿಗೆ ಕನಸೇ. ಅದೇಕೆ ಎಂಬುದನ್ನು ನಿಮ್ಮ ವಿಚಾರಕ್ಕೆ ಬಿಡುತ್ತೇನೆ.

ಗೌರವವು ಕೈ ಬೀಸಿ ಕರೆಯುತ್ತಿರುವ, ಇದನ್ನು ಪೂರ್ತಿ ಮಾಡಿದ ಮೇಲಷ್ಟೇ ಕನಿಷ್ಠ ಸಂಭಾವನೆಯನ್ನು ನಿರೀಕ್ಷಿಸಬಹುದಾದ ಮೇಲ್ಕಂಡ ಕಲಾಕೃತಿಯ ಹೆಗ್ಗಳಿಕೆಯನ್ನು ಸಂಕ್ಷಿಪ್ತವಾಗಿ ವಿವರಿಸುವುದೇ ಈ ಅಂಚೆಯ ಉದ್ದೇಶ. ಇದರ ಶೀರ್ಷಿಕೆ ಮದರ್ಸ್ ಗಿಫ್ಟ್ ಟು ಇಂಡಿಯಾ. ವಿಶಿಷ್ಟ ಕೆತ್ತನೆಯ ಈ ಮರದ ಕಲಾಕೃತಿ, ಸುವಿಖ್ಯಾತ ಕಲಾವಿದ ಭಾನುಪ್ರಕಾಶ್ ಆಚಾರ್ಯ ಅವರ ನಿರ್ದೇಶನದಲ್ಲಿ ಮಹತ್ತರವಾಗಿ ರೂಪುಗೊಂಡಿದೆ.

ಈ ಕಲಾಕೃತಿಯ ಚೌಕಟ್ಟು 7'0" (ಏಳು ಅಡಿ ಉದ್ದ) x 6'0" (ಆರು ಅಡಿ ಎತ್ತರ) ವಿಸ್ತೀರ್ಣವನ್ನು ಹೊಂದಿದ್ದು, ವಿಶೇಷವಾಗಿ ತಯಾರಿಸಲ್ಪಟ್ಟ ವಿವಿಧ ಮರದ (ಸುಮಾರು 6000) ಪದರಗಳ ಅಳವಡಿಕೆಯನ್ನು ಒಳಗೊಂಡಿದ್ದು. ದ್ವಿದಶ (20) ಅಸದೃಶ ಕಲೆಗಾರರ ಕುಸುರಿ ಕೆಲಸದ ಚಮತ್ಕಾರದೊಂದಿಗೆ ಆರು ತಿಂಗಳ ಪರಿಶ್ರಮದ ಸಮೇತ ಅದ್ಭುತವಾಗಿ ಹೊರಹೊಮ್ಮಿದೆ. ವಿಡಿಯೋ ಮತ್ತು ಚಿತ್ರರೂಪದಲ್ಲಿ ಆ ಪರಿಶ್ರಮವಿದೋ:
















ಯಾವ ಕುಸುರಿಯ ಆಗರ ಈ ಕಲಾಕುಸುಮದ ನಿರ್ಮಾಣಕ್ಕೆ ಮುಂದಾಗಿದೆ ಎಂಬುದನ್ನು ವಿವರವಾಗಿ ಅರಿಯಲು ಈ ವಿಡಿಯೋ ಮತ್ತು ಚಿತ್ರಗಳನ್ನು ನೋಡಿ:


























ಇದರ ಮಾರಾಟದಿಂದ ಲಭ್ಯವಾಗುವ ಮೊತ್ತವನ್ನು ಒಂದು ವರ್ಷವಿಡೀ ಇದಕ್ಕಾಗಿ ಶ್ರಮದಾನ ನೀಡಿರುವ ಕಲಾವಿದರಿಗೆ ಹಂಚಲಾಗುವುದು.

ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಎಂ ಎಂ ದೇವ್ ಅವರನ್ನು ಮೊಬೈಲ್ ಫೋನ್ ಸಂಖ್ಯೆ 91 725 909 3200 (WhatsApp) ಅಥವಾ ಇಮೇಲ್ drmmd.intimate@gmail.com; dni.prcapital@gmail.com ಮೂಲಕ ಸಂಪರ್ಕಿಸಬಹುದು.                                                                     


Tuesday, February 15, 2022

ಡೋಂಟ್ ಕೇರ್ ಮಾಸ್ಟರ್

ದೇವ್ ನೆಸ್ಟ್ ಬರಹ

ವೃತ್ತಿಪರರು ತಾವು ಕಾರ್ಯ ನಿರ್ವಹಿಸುವ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಅವರಿಗಿರುವ ಭಯ ಒಂದೇ - ನಕಲೀಕರಣ ಉಂಟಾಗಿ ತಮ್ಮ ಅನ್ನಕ್ಕೆ ಕಲ್ಲು ಬೀಳುತ್ತದೆ ಎಂಬುದು. ಅಂಥ ಭಯ ಅನಗತ್ಯವೆಂಬುದು ನನ್ನ ಭಾವನೆ.

ಪ್ರಕೃತಿ ಪ್ರತಿಯೊಬ್ಬರನ್ನೂ ವಿಭಿನ್ನವಾಗಿ ಸೃಷ್ಟಿಸಿದೆ ಎಂಬುದನ್ನು ಮರೆಯುವ ಹಾಗಿಲ್ಲ. ಪ್ರಕೃತಿಯಿಂದ ದೊರೆತ ಮತ್ತೊಂದು ವರದಾನ - ನಮಗೆ ಗೊತ್ತಿರುವುದನ್ನು ಇನ್ನೊಬ್ಬರಿಗೆ ಹೇಳಿಕೊಟ್ಟರೆ ಈಗಿನದಕ್ಕಿಂತ ಒಂದು ಹಂತ ಎತ್ತರಕ್ಕೆ ಬೆಳೆಯುವುದು. ಪ್ರಕೃತಿಯ ನಿಯಮದ ಪ್ರಕಾರ ನಮ್ಮಿಂದ ಪಾಠ ಕಲಿಯುವವರು ನಮ್ಮ ಶಿಷ್ಯರು. ಅವರು ಶಿಷ್ಯರಿಗಿರಬೇಕಾದ  ವಿಧೇಯತೆಯನ್ನು ಉಳಿಸಿಕೊಳ್ಳದೆ ಹೋದರೆ ಅದಕ್ಕೆ ತಕ್ಕ ಪಾಠವನ್ನು ಪ್ರಕೃತಿಯೇ ಅವರಿಗೆ ಕಲಿಸುತ್ತದೆ! ಗುರುವಿನ ಬತ್ತಳಿಕೆಯಲ್ಲಿ ಶಿಷ್ಯನಿಗೆ ಅರ್ಥವಾಗದ ಒಂದು ರಹಸ್ಯವು ಇದ್ದೇ ಇರುತ್ತದೆ - ಇದೇ ಪ್ರಕೃತಿ ವಿಧಾನ!!!

ಆದ್ದರಿಂದ, ಮುಚ್ಚುಮರೆಯಿಲ್ಲದೆ ನನ್ನ ಕಾರ್ಯ ವಿಧಾನವನ್ನು ನಿಮ್ಮೊಂದಿಗೆ ಹಂಚಿಕೊಂಡು, ನೀವು ಹೆಮ್ಮೆ ಪಡುವ ರೀತಿಯಲ್ಲಿ ನೀವು ನನಗೆ ವಹಿಸುವ ಕೆಲಸವನ್ನು ನಿರ್ವಹಿಸಿ, ಪೂರ್ಣಗೊಳಿಸುವೆನೆಂಬ ಭರವಸೆಯನ್ನು ಇದೋ ನೀಡುತ್ತಿದ್ದೇನೆ.

ದೂರವಾಣಿ ಸಂಖ್ಯೆ 91-7259093200 ಎಡೆಬಿಡದೆ ಚಾಲ್ತಿಯಲ್ಲಿದ್ದು ನನ್ನ ಅಚ್ಚುಮೆಚ್ಚಿನವರಾದ ನಿಮ್ಮೆಲ್ಲರ ಅಮೂಲ್ಯವಾದ ಕರೆಗಳ ನಿರೀಕ್ಷೆಯಲ್ಲಿರುತ್ತದೆ.

Sunday, February 13, 2022

ನನ್ನ ಬಿಜಿನೆಸ್ ಕಾರ್ಡ್

ದೇವ್ ನೆಸ್ಟ್ ಬರಹ

ದಿನದ ಚಟುವಟಿಕೆಗಳನ್ನು ಸಾಧಾರಣವಾದ ಕಛೇರಿಯೊಂದರಲ್ಲಿ ನಿರ್ವಹಿಸುತ್ತ, ಅಪೂರ್ವ ಸಾಧನೆಗಳನ್ನು ದಾಖಲಿಸುವ ಉದ್ದೇಶ. ಈ ಉದ್ದೇಶಿತ ಕಛೇರಿಯ ಸ್ವರೂಪ ಇಂತಿರಬೇಕೆಂಬುದನ್ನು ಚಿತ್ರಗಳ ಮೂಲಕ ಆರಂಭದ ಅಂಚೆಯಲ್ಲಿ ಪ್ರಸ್ತುತ ಪಡಿಸಿದ್ದೇನೆ.

ನನ್ನ ಬಿಜಿನೆಸ್ ಕಾರ್ಡ್ ಇದೋ ನಿಮ್ಮ ಮುಂದಿದೆ:


ನೆನೆಗುದಿಗೆ ಬಿದ್ದಿರುವ ನಿಮ್ಮ ಕಾರ್ಯವದಾವುದು? ವರ್ಷಗಳು ಉರುಳುತ್ತಿವೆ, ಅದು ಆಗಲಿಲ್ಲವಲ್ಲ, ನನ್ನಂಥ ವ್ಯಕ್ತಿ ನಿಮಗೆ ಸಿಗುವುದು ಎಂದು ಎಂಬ ದ್ವಂದ್ವಕ್ಕೆ ಇನ್ನು ಎಡೆಯಿಲ್ಲ.

ದೂರವಾಣಿ ಸಂಖ್ಯೆ 91-7259093200 ಎಡೆಬಿಡದೆ ಚಾಲ್ತಿಯಲ್ಲಿದ್ದು ನನ್ನ ಅಚ್ಚುಮೆಚ್ಚಿನವರಾದ ನಿಮ್ಮೆಲ್ಲರ ಅಮೂಲ್ಯವಾದ ಕರೆಗಳ ನಿರೀಕ್ಷೆಯಲ್ಲಿರುತ್ತದೆ.

Saturday, February 12, 2022

ನನ್ನೂರು ನಂಜನಗೂಡು

 ದೇವ್ ನೆಸ್ಟ್ ಬರಹ

ನಂಜನಗೂಡಿನ ಮೋಹಕ, ಮಹತ್ವಪೂರ್ಣ ಧರಿತ್ರಿಯು ನನಗೆ ದಯಪಾಲಿಸಿರುವ ಚೇತೋಹಾರಿ ಬದುಕಿನ ಸಂಗತಿಗಳನ್ನು ಓದುಗರ ಸಮ್ಮುಖದಲ್ಲಿ ಬಹಿರಂಗಗೊಳಿಸುವ ತವಕ.


ಆ ತವಕಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಈ ಬ್ಲಾಗ್ ಸರಣಿ ಸ್ಪಂದಿಸಲಿದೆ ಎಂದು ತಿಳಿಸುವ ಹೆಮ್ಮೆ ನನ್ನದು.


ಈ ಸರಣಿಯಲ್ಲಿ ಒಂದು ಅಂಚೆ ನಂಜನಗೂಡಿನ ವಿಶೇಷವೊಂದನ್ನು ವಿವರಿಸಲು ಯತ್ನಿಸಿದರೆ, ಆ ನಂತರದ ಅಂಚೆ ನಾನು ಜಾಣ್ಮೆಯಿಂದ ನಿರ್ವಹಿಸಿದ ಒಂದು ಪಿ ಆರ್ ಕೆಲಸದ ಪರಿಚಯವನ್ನು ನಿಮಗೆ ನೀಡಲಿದೆ.


ಈ ಸರಣಿಯ ಔಚಿತ್ಯ ಕುರಿತು ಆಗಿಂದಾಗ್ಗೆ ಓದುಗರಿಂದ ಸಲಹೆ ಪ್ರಾಪ್ತವಾಗುವುದೆಂದು ನಂಬಿದ್ದೇನೆ. 


ಓದುಗರೊಂದಿಗೆ ನಿರಂತರ ಚರ್ಚೆಯಲ್ಲಿ ಭಾಗವಹಿಸುತ್ತ, ಬ್ಲಾಗ್ ಮೌಲ್ಯವನ್ನು ಕಾಪಾಡಿಕೊಂಡು ಮುಂದುವರಿಯುವುದು ನನ್ನ ಅಪೇಕ್ಷೆ.


ದೂರವಾಣಿ ಸಂಖ್ಯೆ 91-7259093200 ಸದಾ ಓದುಗರ ಅಮೂಲ್ಯವಾದ ಕರೆಗಳ ನಿರೀಕ್ಷೆಯಲ್ಲಿರುತ್ತದೆ.





Hosa Belaku Trust

H osa Belaku Trust has become a name that many people in Karnataka, especially in Bangalore, have come to recognize for its steady work in t...